ಬುಧವಾರ, ಫೆಬ್ರವರಿ 22, 2012

ನೆಲ-ಮುಗಿಲು

ಎದುರು ಬದುರಾಗಿದ್ದರೂ
ಒಮ್ಮೆಯೂ ತಬ್ಬಿಕೊಳ್ಳದ ದುರ್ದೈವಿಗಳು
ಈ ನೆಲ ಮುಗಿಲುಗಳು.

ಇದರ ಮುಖ ಅದು
ಅದರ ಮುಖ ಇದು
ನೋಡಿಕೊಂಡು ನಡೆಯುವುದು ಅಷ್ಟೇ ಕಾಯಕ
ಪಾಪ ನಿರ್ಭಾಗ್ಯ ನೆಲಮುಗಿಲುಗಳು.

ಆಸೆಯ ಹಂದರ
ಆ ಮಧ್ಯದ ವಿಶಾಳದೊಷ್ಟಿದ್ದರೂ
ಕೂಡಲಾಗದು ಒಮ್ಮೆಯೂ,
ತೀರಿಸಿ ಕೊಳ್ಳಲಾಗದು ಬದುಕೆಂಬ ಬಯಕೆಯ ಭಾವನೆಗಳ.

ಭಾವದ ಬಂಧನದ ವಿಸ್ತಾರ
ಬದುಕಿನ ಹಂದರದ ಅಗಲ,
ಕೊನೆಗೊಮ್ಮೆ ಕೂಡಬಹುದಾ.......!
ಅಥವಾ ಬಯಕೆಯಲ್ಲೇ ಕೊನೆಗೊಳ್ಳುವುದಾ....?

ಆದರೂ ಒಮ್ಮೊಮ್ಮೆ ಅನಿಸುವುದು
ಈ ಅಂತರದಲಿ ಏನೋ ಭಾವದ ಬಂಧನವಿದೆ ಎಂದು.......!

$ ವಸಂತ ಬಿ ಈಶ್ವರಗೆರೆ $

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ