ಶನಿವಾರ, ಜುಲೈ 21, 2012

ಗೆಳತಿ ಕೇಳು ನನ್ನ ವಿನಂತಿ

ಕರಗುವುದು ಇಬ್ಬನಿ 
ಮುಂಜಾನೆಯ ಸೂರ್ಯನ ಮೊದಲ ರಶ್ಮಿಗೆ.
ಆಗ ಸೆಳೆಯುತಿದೆ ನೆನಪು 
ನಿನ್ನ ಪ್ರೀತಿಯ ಕಡೆಗೆ.

ಹಾಡಿದೆ ಕೋಗಿಲೆ 
ಹೊಸ ಚಿಗುರಿನ ಆಗಮನಕೆ.
ಈಗ ಕನವರಿಸುತಿದೆ ಮನ 
ನಿನ್ನಯ ಪ್ರೀತಿಯ ಹಂಬಲಿಕೆಗೆ. 

ಹಡೆದವ್ವನ ಹಾರೈಕೆಯಲಿ 
ಕಂದಮ್ಮ ಮುದ್ದು.
ನಿನ್ನ ಅಭಿಸರಿಕೆಯ ಅಲಿಂಗನದಲಿ
ನಾನೀಗ ಬಲು ಪೆದ್ದು.

ಕೇಳು ಗೆಳತಿ.....!
ಮುಂಜಾನೆಯ ಮಂಜು
ಸೂರ್ಯನ ಕಿರಣಕ್ಕೆ ಕರಗಬಹುದು,
ಕೋಗಿಲೆಯ ಗಾನ 
ವಸಂತ ಮಾಸದಲಿ ಮಾತ್ರ ಕೇಳಬಹುದು,
ಹಡೆದವ್ವನ ಹಾರೈಕೆ 
ಅಡಿಗಡಿಗೂ ಸಿಗಬಹುದು.

ಆದರೇ......!
ನಿನ್ನ ಪ್ರೀತಿ ಕ್ಷಣ ಕಾಲ ದೊರೆತರೂ...,
ನಾನೇ ದಾನ್ಯ,
ನನ್ನದೇ ಪುಣ್ಯ,
ಈ ಜೀವನವೇ ಪಾವನ......!

$ವಸಂತ ಬಿ ಈಶ್ವರಗೆರೆ$