ಬುಧವಾರ, ಆಗಸ್ಟ್ 29, 2012

ಯಶಸ್ಸು


ಬದುಕು ಬರವಸೆಯ ಗೂಡು
ಕಾಲವೇ ಅದಕೆ ನಿರ್ಣಯ ನೋಡು.
 
ಕಾಯ ಬೇಕು ನಾಳೆಗೆ 
ಕಾಪಿಡಬೇಕು ಬಾಳಿಗೆ.
 
ಮೌನಕ್ಕೆ ಶರಣಾಗದಿರು
ಯಾರ ಮಾತಿಗೂ ಕಿವಿಯ ಗೊಡದಿರು.
 
ಕಾಲದ ಉರುಳಿಗೆ ಕುಣಿಯಲೇ ಬೇಕು
ತಾಳದ ಲಯಕ್ಕೆ ಶ್ರುತಿ ಹೊರಡಲೇ ಬೇಕು.
 
ಎದರ ಬೇಡ.......!
 
ಕಷ್ಟವಿದ್ದರೂ ಸೈ
ದು:ಖ ಬಂದರು ಜಯಿಸಲು ಸೈ
 
ತಲೆ ಬಾಗದಿರು ಯಾರಿಗೂ
ಯಶದ ಶಿಖರವೆ ಆಗ ನಿನ್ನಯ ಪಾಲಿಗೆ....!
 
$ ವಸಂತ ಬಿ ಈಶ್ವರಗೆರೆ $

ಗುರುವಾರ, ಆಗಸ್ಟ್ 23, 2012

ಬದುಕು


ಬಾಳೆಂಬ ಬದುಕಿನ ಯಾನ
ಬಂಧನಗಳ ಬೆಸುಗೆಯಲಿ ಸಿಲುಕಿ,
ಕಷ್ಟಗಳ ನಲುಮೆಯಲಿ ಕುಲಿಕಿ,
ನಡೆಯುತಿದೆ ಹೊಸತು ಹಳತುಗಳ ಜೊತೆಗೂಡಿದ ಯಾನ...!


ಕಷ್ಟಕ್ಕೆ ಕೊನೆ ಇಲ್ಲ
ಇಷ್ಟಕ್ಕೆ ಮಿತಿ ಇಲ್ಲ
ಕಷ್ಟ-ಸುಖವರಿತು ನಡೆದಾಗ,
ಬದುಕು ಬೇವು ಬೆಲ್ಲದ ಜೊತೆಗಿನ ಯಾನ....!

$ ವಸಂತ ಬಿ ಈಶ್ವರಗೆರೆ $