ಬರಡು ಭೂಮಿಗೆ,
ಮುತ್ತಿನ ಹನಿಗಳ ಸುರಿಸಿ,
ಹಸಿರ ಚಿಗುರಿಸು ಮಳೆರಾಯ.
ಕಾದು ಬಾಯ್ದೆರೆದಿದೆ,
ನಿನ್ನ ಆಗಮನದ ನಿರೀಕ್ಷೆಯಲಿದೆ, ಸುರಿಯಲು ಬಾರೆಯ ಮಹರಾಯ..?
ರೈತ ಮುಗಿಲತ್ತ ನೋಡುತ,
ಪಶು ಪಕ್ಷಿಗಳೆಲ್ಲ ನಿನಗಾಗಿ ಹುಯ್ಯಲಿಡುತ,
ಕರುಣೆ ತೋರಲಾರೆಯ ಮುನಿದ ಮಾಯ...?
ಬೆಟ್ಟದಲಿ ಹಸಿರಿಲ್ಲ,
ಭುವಿಯಲಿ ತಂಪಿನ ಕಂಪಿಲ್ಲ, ತೋರಲಾರೆಯ ಹೊಸ ಚೇತನ ರಾಯ...?
ನೀರಿಗಾಗಿ ಆಹಕಾರ ಏಳುವ ಮುನ್ನ,
ಜಾನುವಾರುಗಳು ಹಸಿವಿನಿಂದ ಸಾಯುವ ಮುನ್ನ,
ಈ ಧರೆ ಬಾಯಿ ಬಿಟ್ಟು ಎಲ್ಲರನು ಮಣ್ಣಾಗಿಸುವ ಮುನ್ನ,
ನಿನ್ನ ಸಿಂಚನ ಸುರಿಸು,
ಕುಂಚದಲಿ ಹಸಿರ ಸಿರಿಯನು ಮೂಡಿಸು,
ಜನ ಜಾನುವಾರುಗಳ ಮನ ದುಂಬಿ ನಲಿಸು....!
$ ವಸಂತ ಬಿ ಈಶ್ವರಗೆರೆ $
ಮುತ್ತಿನ ಹನಿಗಳ ಸುರಿಸಿ,
ಹಸಿರ ಚಿಗುರಿಸು ಮಳೆರಾಯ.
ಕಾದು ಬಾಯ್ದೆರೆದಿದೆ,
ನಿನ್ನ ಆಗಮನದ ನಿರೀಕ್ಷೆಯಲಿದೆ, ಸುರಿಯಲು ಬಾರೆಯ ಮಹರಾಯ..?
ರೈತ ಮುಗಿಲತ್ತ ನೋಡುತ,
ಪಶು ಪಕ್ಷಿಗಳೆಲ್ಲ ನಿನಗಾಗಿ ಹುಯ್ಯಲಿಡುತ,
ಕರುಣೆ ತೋರಲಾರೆಯ ಮುನಿದ ಮಾಯ...?
ಬೆಟ್ಟದಲಿ ಹಸಿರಿಲ್ಲ,
ಭುವಿಯಲಿ ತಂಪಿನ ಕಂಪಿಲ್ಲ, ತೋರಲಾರೆಯ ಹೊಸ ಚೇತನ ರಾಯ...?
ನೀರಿಗಾಗಿ ಆಹಕಾರ ಏಳುವ ಮುನ್ನ,
ಜಾನುವಾರುಗಳು ಹಸಿವಿನಿಂದ ಸಾಯುವ ಮುನ್ನ,
ಈ ಧರೆ ಬಾಯಿ ಬಿಟ್ಟು ಎಲ್ಲರನು ಮಣ್ಣಾಗಿಸುವ ಮುನ್ನ,
ನಿನ್ನ ಸಿಂಚನ ಸುರಿಸು,
ಕುಂಚದಲಿ ಹಸಿರ ಸಿರಿಯನು ಮೂಡಿಸು,
ಜನ ಜಾನುವಾರುಗಳ ಮನ ದುಂಬಿ ನಲಿಸು....!
$ ವಸಂತ ಬಿ ಈಶ್ವರಗೆರೆ $
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ