ಮಂಗಳವಾರ, ಮಾರ್ಚ್ 19, 2013

ಯುದ್ದ


ರಾಜರಾಳ್ವಿಕೆಯಲಿ ರಾಜ್ಯ ಕಬಳಿಕೆಗಾಗಿ ಯುದ್ದ,
ಗಾಂಧೀ ಕಾಲದಲಿ ಶಾಂತಿ ಅಸ್ತ್ರದಿ ಸ್ವಾತಂತ್ರಗಳಿಕೆಗಾಗಿ ನಡೆಯಿತು ಯುದ್ದ,
ನೆಹರು ಕಾಲದಲಿ ದೇಶ ರಕ್ಷಣೆಗಾಗಿ ನಡೆದಿತ್ತು ಯುದ್ದ,
ವೀರಪ್ಪನ್ನ ಕಾಲದಲಿ ಗಂಧ-ದಂತಕಾಗಿ ನಡೆದಿತ್ತು ಯುದ್ದ,
ಪ್ರಪಂಚ ತನ್ನಾಸರೆಯೊಳಗಿರಬೇಕೆಂದು ಅಮೇರಿಕಾ ಮಾಡಿತು ೧, ೨ನೇ ಮಹಾಯುದ್ದ,
ಅವಿಭಕ್ತ ಕುಟುಂಬದೊಳಗೂ ವಿಭಕ್ತಿಗಾಗಿ ನಡೆಯುತಿದೆ ದಿನಾಲೂ ಯುದ್ದ,
ರಾಜಕಾರಣಿಗಳ ಅಧಿಕಾರ ದಾಹದಿಂದ ನಡೆಯುತಿದೆ ವಿಧಾನ ಸೌದದಲಿ ಯುದ್ದ,
ಬಡತನದಿ ಬೆಂದ ಜನ ಹಸಿವ ನೀಗಿಸಲು ನಡೆಸುತ್ತಿದ್ದಾರೆ ಯುದ್ದ,
ಏನಾದರೇನಂತೆ..,
ಕೇಳುವುದೇ ಈ ಸಂತೆ..?
ಕಾಲಗರ್ಭದಲ್ಲೀಗ ಅವುಗಳದೇ ಕಂತೆ...!

$ ವಸಂತ ಬಿ ಈಶ್ವರಗೆರೆ $

ಇರುವೆ


ಇರುವೆ ಇರುವೆ ಕಪ್ಪಿರುವೆ
ಎಲ್ಲರ ಪ್ರೀತಿಯ ಗಳಿಸಿರುವೆ.
ಬೇಸಿಗೆಯಲಿ ಮನೆ ಕಟ್ಟಿರುವೆ,
ಮಳೆಗಾಲಕೆಂದು ಆಹಾರ ಸಂಗ್ರಹಿಸಿರುವೆ.
ಮೈಯನು ಏರಲು ಕಚಗುಳಿ ಇಡುವೆ,
ಹಿಡಿಯಲು ಬಂದರೆ ಜಾರುತಲಿರುವೆ,
ಇರುವೆ ಇರುವೆ ಕಪ್ಪಿರುವೆ,
ಎಲ್ಲರ ಪ್ರೀತಿಯ ಗಳೆಸಿರುವೆ.

$ ವಸಂತ ಬಿ ಈಶ್ವರಗೆರೆ $

ಶುಕ್ರವಾರ, ಜನವರಿ 25, 2013

23-1-2013 ರಂದು ವಿಜಯ ಕರ್ನಾಟಕದಲ್ಲಿ ಪ್ರಕಟವಾದ ವಾಚಕರವಾಣಿ ಲೇಖನ 2


23-1-2013 ರಂದು ವಿಜಯ ಕರ್ನಾಟಕದಲ್ಲಿ ಪ್ರಕಟವಾದ ವಾಚಕರವಾಣಿ ಲೇಖನ


ಹುಡುಗಿಯರೇಕೆ ಹೀಗೆ.....?

ಈ ಹುಡುಗಿಯರೇ ಹೀಗೆ....., ಕುಲುಕುತ್ತಾರೆ, 
ಬಳುಕಿ ನಡೆಯುತ್ತಾ, 
ಹುಡುಗರನ್ನ ಆಕರ್ಷಿಸುತ್ತಾರೆ. 

ರಂಗು ರಂಗಿನ ಉಡುಗೆಯಲಿ, 
ಬಿಂಕ ಬಿನ್ನಾಣದ ನಡುಗೆಯಲಿ ಸೆಳೆಯುತ್ತಾರೆ. 

ಬಲೆಗೆ ಬಿದ್ದ ಹುಡುಗರಿಗೆ, 
ಷಾಪಿಂಗ್ ಅಂತೇಳಿ ಜೇಬಿಗೆ ಕತ್ತರಿ ಹಾಕುತ್ತಾರೆ. 

ದಿನಂ ಪ್ರತಿ ಪೋನ್, ಮೆಸೇಜ್ ಮಾಡಲಿಲ್ಲ ಅಂದ್ರೇ ಸಿಟ್ಟಾಗಿ ಹುಡುಗರನ್ನ ಪೆಚ್ಚು ಮಾಡುತ್ತಾರೆ.
ಅಂತೂ ಇಂತೂ SORRY,THANX, LIKE U ಅನ್ನೋದ್ರಲ್ಲೇ ಕಾಲ ತಳ್ಳಿ ಬಿಡುತ್ತಾರೆ. 

ಕೊನೆಗೆ ಒಂದು ದಿನ ಇಲ್ಲ ಸಲ್ಲದ ನೆಪ ಹೇಳಿ,
ಮುಗ್ದ ಹುಡುಗರನ್ನ ದೇವದಾಸ್ ಮಾಡಿ,
ದೂರವಾಗೇ ಬಿಡ್ತಾರೆ.