ಬುಧವಾರ, ಡಿಸೆಂಬರ್ 19, 2012
ಮಂಗಳವಾರ, ಡಿಸೆಂಬರ್ 11, 2012
ಗುರುವಾರ, ಡಿಸೆಂಬರ್ 6, 2012
ತನಿಖೆ
ಆವಾಗ್ ಆವಾಗ್
ಬಿಡುಗಡೆ ಮಾಡ್ತರೆ ಭೂ ಹಗರಣ,
ಇದೇ ನೋಡ್ರೀ ನಮ್ ರಾಜಕಾರಣಿಗಳ್ ಮುಖದ್ ಆನಾವರಣ.
ಆವರಣ-ಅನಾವರಣಕ್ಕೆ ವಿರೋಧ ಪಕ್ಷಗಳ್ ತನಿಖೆ ಆಗಬೇಕ್ ಅನ್ನೋ ಓರ್ಣ,
ಈ ತನಿಖೆಗಾ ಇಡಿತಾವ್ ರೀ...
ಈಗೀಗಾ ದಿನಗಳ್, ವಾರಂಗಳ್, ಮಾಸಂಗಳ್, ವರ್ಷಂಗಳ್.....!
ಗುರುವಾರ, ನವೆಂಬರ್ 29, 2012
ಜೋಗಿ
ಹೊತ್ತಿಗೆ ಸರಿಯಾಗಿ ಎದ್ದು,
ಮುತ್ತಿನ ಮಾತ ನುಡಿವ ಜೋಗಿ,
ಹೊರಟಿರುವೆ ಮನೆ ಮನೆ ಹಾಡಲು.
ಜಗದ ಗೊಡವೆಯ ತೊರೆದು, ಪರಮಾತ್ಮನ ನುಡಿಯ ಉಲಿದು,
ಭಕ್ತಿಯ ಪರಮಾನ್ನ ಉಣಬಡಿಸಲು,
ಹೊರಟಿರುವೆ ಜೋಗಿ ಮನೆ ಮನೆಗೆ.
ಮುತ್ತಿನ ಮಾತ ನುಡಿವ ಜೋಗಿ,
ಹೊರಟಿರುವೆ ಮನೆ ಮನೆ ಹಾಡಲು.
ಜಗದ ಗೊಡವೆಯ ತೊರೆದು, ಪರಮಾತ್ಮನ ನುಡಿಯ ಉಲಿದು,
ಭಕ್ತಿಯ ಪರಮಾನ್ನ ಉಣಬಡಿಸಲು,
ಹೊರಟಿರುವೆ ಜೋಗಿ ಮನೆ ಮನೆಗೆ.
ವೇಷವೇ ಸೋಜಿಗ,
ಅದರೊಳಗೆಲ್ಲವೂ ಭಕ್ತಿ ಯುಗ,
ಮುಕ್ತಿಯ ಮಧುರ ಮನ ತುಂಬಲು, ಹೊರಟಿರುವೆ ಜೋಗಿ ಮನೆ ಮನೆಗೆ.
ಭಕ್ತಿಯ ಭಿಕ್ಷೆ ಬೇಡುವೆ,
ಮುಕ್ತಿಯ ಮಾರ್ಗ ಹಾಡಿ ತೋರಿಸುವೆ, ಭವದ ಸಂಕಟ ಮರೆಸಲು,
ಹೋರಟಿರುವೆ ಜೋಗಿ ಮನೆ ಮನೆಗೆ.
ಓ ಜೋಗಿ ನಿನ್ನ ಈ ಕಾಯಕಕೆ ನೆಲೆಯಿಲ್ಲ,
ಈ ಜಗವೆ ನಿನ್ನ ಅರಮನೆಯಲ್ಲ, ಭಕ್ತಿಯ ದಾರಿ ತೋರಿಸಿ,
ಮುಕ್ತಿಯ ಮಾರ್ಗ ಕಲಿಸಲು,
ಸದಾ ಸಾಗು ಜೋಗಿ ನೀ ಮನೆಯಿಂದ ಮನೆಗೆ.....!
$ ವಸಂತ ಬಿ ಈಶ್ವರಗೆರೆ $
ಅದರೊಳಗೆಲ್ಲವೂ ಭಕ್ತಿ ಯುಗ,
ಮುಕ್ತಿಯ ಮಧುರ ಮನ ತುಂಬಲು, ಹೊರಟಿರುವೆ ಜೋಗಿ ಮನೆ ಮನೆಗೆ.
ಭಕ್ತಿಯ ಭಿಕ್ಷೆ ಬೇಡುವೆ,
ಮುಕ್ತಿಯ ಮಾರ್ಗ ಹಾಡಿ ತೋರಿಸುವೆ, ಭವದ ಸಂಕಟ ಮರೆಸಲು,
ಹೋರಟಿರುವೆ ಜೋಗಿ ಮನೆ ಮನೆಗೆ.
ಓ ಜೋಗಿ ನಿನ್ನ ಈ ಕಾಯಕಕೆ ನೆಲೆಯಿಲ್ಲ,
ಈ ಜಗವೆ ನಿನ್ನ ಅರಮನೆಯಲ್ಲ, ಭಕ್ತಿಯ ದಾರಿ ತೋರಿಸಿ,
ಮುಕ್ತಿಯ ಮಾರ್ಗ ಕಲಿಸಲು,
ಸದಾ ಸಾಗು ಜೋಗಿ ನೀ ಮನೆಯಿಂದ ಮನೆಗೆ.....!
$ ವಸಂತ ಬಿ ಈಶ್ವರಗೆರೆ $
ಮಳೆರಾಯ
ಬರಡು ಭೂಮಿಗೆ,
ಮುತ್ತಿನ ಹನಿಗಳ ಸುರಿಸಿ,
ಹಸಿರ ಚಿಗುರಿಸು ಮಳೆರಾಯ.
ಕಾದು ಬಾಯ್ದೆರೆದಿದೆ,
ನಿನ್ನ ಆಗಮನದ ನಿರೀಕ್ಷೆಯಲಿದೆ, ಸುರಿಯಲು ಬಾರೆಯ ಮಹರಾಯ..?
ರೈತ ಮುಗಿಲತ್ತ ನೋಡುತ,
ಪಶು ಪಕ್ಷಿಗಳೆಲ್ಲ ನಿನಗಾಗಿ ಹುಯ್ಯಲಿಡುತ,
ಕರುಣೆ ತೋರಲಾರೆಯ ಮುನಿದ ಮಾಯ...?
ಬೆಟ್ಟದಲಿ ಹಸಿರಿಲ್ಲ,
ಭುವಿಯಲಿ ತಂಪಿನ ಕಂಪಿಲ್ಲ, ತೋರಲಾರೆಯ ಹೊಸ ಚೇತನ ರಾಯ...?
ನೀರಿಗಾಗಿ ಆಹಕಾರ ಏಳುವ ಮುನ್ನ,
ಜಾನುವಾರುಗಳು ಹಸಿವಿನಿಂದ ಸಾಯುವ ಮುನ್ನ,
ಈ ಧರೆ ಬಾಯಿ ಬಿಟ್ಟು ಎಲ್ಲರನು ಮಣ್ಣಾಗಿಸುವ ಮುನ್ನ,
ನಿನ್ನ ಸಿಂಚನ ಸುರಿಸು,
ಕುಂಚದಲಿ ಹಸಿರ ಸಿರಿಯನು ಮೂಡಿಸು,
ಜನ ಜಾನುವಾರುಗಳ ಮನ ದುಂಬಿ ನಲಿಸು....!
$ ವಸಂತ ಬಿ ಈಶ್ವರಗೆರೆ $
ಮುತ್ತಿನ ಹನಿಗಳ ಸುರಿಸಿ,
ಹಸಿರ ಚಿಗುರಿಸು ಮಳೆರಾಯ.
ಕಾದು ಬಾಯ್ದೆರೆದಿದೆ,
ನಿನ್ನ ಆಗಮನದ ನಿರೀಕ್ಷೆಯಲಿದೆ, ಸುರಿಯಲು ಬಾರೆಯ ಮಹರಾಯ..?
ರೈತ ಮುಗಿಲತ್ತ ನೋಡುತ,
ಪಶು ಪಕ್ಷಿಗಳೆಲ್ಲ ನಿನಗಾಗಿ ಹುಯ್ಯಲಿಡುತ,
ಕರುಣೆ ತೋರಲಾರೆಯ ಮುನಿದ ಮಾಯ...?
ಬೆಟ್ಟದಲಿ ಹಸಿರಿಲ್ಲ,
ಭುವಿಯಲಿ ತಂಪಿನ ಕಂಪಿಲ್ಲ, ತೋರಲಾರೆಯ ಹೊಸ ಚೇತನ ರಾಯ...?
ನೀರಿಗಾಗಿ ಆಹಕಾರ ಏಳುವ ಮುನ್ನ,
ಜಾನುವಾರುಗಳು ಹಸಿವಿನಿಂದ ಸಾಯುವ ಮುನ್ನ,
ಈ ಧರೆ ಬಾಯಿ ಬಿಟ್ಟು ಎಲ್ಲರನು ಮಣ್ಣಾಗಿಸುವ ಮುನ್ನ,
ನಿನ್ನ ಸಿಂಚನ ಸುರಿಸು,
ಕುಂಚದಲಿ ಹಸಿರ ಸಿರಿಯನು ಮೂಡಿಸು,
ಜನ ಜಾನುವಾರುಗಳ ಮನ ದುಂಬಿ ನಲಿಸು....!
$ ವಸಂತ ಬಿ ಈಶ್ವರಗೆರೆ $
ಬುಧವಾರ, ನವೆಂಬರ್ 7, 2012
ಉತ್ತರವಿಲ್ಲ
ಸಂಬಂಧಗಳ ಕೊಂಡಿ ಕಳಚಿ,
ಸ್ನೇಹದ ಸಲುಗೆಯ ಬಿಚ್ಚಿ,
ಪ್ರೀತಿಯ ಒಲುಮೆಯ ಚುಚ್ಚಿ,
ಬಿಟ್ಟು ಹೊರಟೆ ನೀ ಏಲ್ಲಿಗೆ ....?
ಉತ್ತರ ನಿನ್ನೊಳಗೆ ಇಲ್ಲ ಎಂದರೇ...
ಈ ಪ್ರಶ್ನೆಗಳ ಹುಟ್ಟಿಸಿದ್ದಾದರೂ ಏಕೆ ನನ್ನೊಳಗೆ.....?
ನಿನಗೆ ನನ್ನ ಸಂಬಂಧ ಬೇಡ,
ಪ್ರೀತಿಯ ಒಲುಮೆಯೂ ಬೇಡ,
ನನ್ನ ಸ್ನೇಹದ ಸಹವಾಸವಂತೂ ಬೇಡವೇ ಬೇಡ.
ಆದರೇ.....!
ಅನಾಮಿಕೆಯಂತೆ ಅದರೂ ಇರಬಹುದಲ್ಲವೇ ಜೊತೆಗೆ.....?
ನಿನ್ನಿಂದ ಈ ಮೊದಲ ಸ್ನೇಹ
ಪ್ರೇಮ ಸಿಗದೇ ಹೋದರೂ..
ನೆನಪೋಳಗಾದರೂ...
ಕನವರಿಕೆಯ ನಲುಮೆಯಿಂದಾದರೂ...
ಈ ಎಲ್ಲವ ಮರೆತು ಮಾತಡಬಹುದಲ್ಲವೇ ನನ್ನ ಜೊತೆಗೆ...?
ಅದರೂ ಒಮ್ಮೊಮ್ಮೆ ಅನಿಸುವುದು
ನನ್ನ ಮನ ಮಿಡಿದ ವಾತ್ಸಲ್ಯ,
ನೆಮ್ಮದಿಯ ಸ್ನೇಹದ ಸಾಂಗತ್ಯ,
ಪ್ರೀತಿಯ ರಸದ ಚಿಲುಮೆ,
ಏಕೆ ಬೇಡವಾಯಿತು ನಿನಗೆ ಎಂದು.....?
ನನ್ನ ಈ ಪ್ರಶ್ನೆಗಳಿಗೆ ಕಾಲ ಉತ್ತರ ನೀಡಬೇಕಿಲ್ಲ..
ನೀನೆ ನೀಡಬೇಕು...!
ನಾ ಕಾಯುವೆ ಆ ದಿನಕ್ಕಾಗೆ,
ಅದೆಷ್ಟು ಬೆಂದರೂ ಈ ಬೇಗೆ,
ಬೇಯಲಿ ಅಲ್ಲಿಯವರೆಗೂ ನನ್ನೊಳಗೆ.....!
$ ವಸಂತ ಬಿ ಈಶ್ವರಗೆರೆ $
ಪ್ರೀತಿಯ ಒಲುಮೆಯ ಚುಚ್ಚಿ,
ಬಿಟ್ಟು ಹೊರಟೆ ನೀ ಏಲ್ಲಿಗೆ ....?
ಉತ್ತರ ನಿನ್ನೊಳಗೆ ಇಲ್ಲ ಎಂದರೇ...
ಈ ಪ್ರಶ್ನೆಗಳ ಹುಟ್ಟಿಸಿದ್ದಾದರೂ ಏಕೆ ನನ್ನೊಳಗೆ.....?
ನಿನಗೆ ನನ್ನ ಸಂಬಂಧ ಬೇಡ,
ಪ್ರೀತಿಯ ಒಲುಮೆಯೂ ಬೇಡ,
ನನ್ನ ಸ್ನೇಹದ ಸಹವಾಸವಂತೂ ಬೇಡವೇ ಬೇಡ.
ಆದರೇ.....!
ಅನಾಮಿಕೆಯಂತೆ ಅದರೂ ಇರಬಹುದಲ್ಲವೇ ಜೊತೆಗೆ.....?
ನಿನ್ನಿಂದ ಈ ಮೊದಲ ಸ್ನೇಹ
ಪ್ರೇಮ ಸಿಗದೇ ಹೋದರೂ..
ನೆನಪೋಳಗಾದರೂ...
ಕನವರಿಕೆಯ ನಲುಮೆಯಿಂದಾದರೂ...
ಈ ಎಲ್ಲವ ಮರೆತು ಮಾತಡಬಹುದಲ್ಲವೇ ನನ್ನ ಜೊತೆಗೆ...?
ಅದರೂ ಒಮ್ಮೊಮ್ಮೆ ಅನಿಸುವುದು
ನನ್ನ ಮನ ಮಿಡಿದ ವಾತ್ಸಲ್ಯ,
ನೆಮ್ಮದಿಯ ಸ್ನೇಹದ ಸಾಂಗತ್ಯ,
ಪ್ರೀತಿಯ ರಸದ ಚಿಲುಮೆ,
ಏಕೆ ಬೇಡವಾಯಿತು ನಿನಗೆ ಎಂದು.....?
ನನ್ನ ಈ ಪ್ರಶ್ನೆಗಳಿಗೆ ಕಾಲ ಉತ್ತರ ನೀಡಬೇಕಿಲ್ಲ..
ನೀನೆ ನೀಡಬೇಕು...!
ನಾ ಕಾಯುವೆ ಆ ದಿನಕ್ಕಾಗೆ,
ಅದೆಷ್ಟು ಬೆಂದರೂ ಈ ಬೇಗೆ,
ಬೇಯಲಿ ಅಲ್ಲಿಯವರೆಗೂ ನನ್ನೊಳಗೆ.....!
$ ವಸಂತ ಬಿ ಈಶ್ವರಗೆರೆ $
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)

